ಹೈದರಾಬಾದ್: ಜುಬಿಲಿ ಹಿಲ್ಸ್ ಉಪಚುನಾವಣೆಯಲ್ಲಿ ಮತಗಳನ್ನು ಗಳಿಸಲು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮುಸ್ಲಿಮರ ಟೋಪಿ ಧರಿಸಿದ್ದಾರೆ ಎಂದು ಕೇಂದ್ರ ಸಚಿವ ಬಂಡಿ ಸಂಜಯ್ ಟೀಕಿಸಿದ್ದಾರೆ. ಇದು ಇತರ ಧರ್ಮಗಳಿಗೆ ಮಾಡಿದ ಅವಮಾನ. ನಿಜವಾದ ಹಿಂದೂವಾಗಿ ಅವರು ಅಂತಹ ಆಚರಣೆಗಳಿಂದ ದೂರವಿರುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು “ವೋಟುಗಳಿಗಾಗಿ ಟೋಪಿ ಧರಿಸಿದ್ದಾರೆ” ಎಂದು ಆರೋಪಿಸಿದರು. ನವೆಂಬರ್ 11ರಂದು ನಡೆಯಲಿರುವ ಜುಬಿಲಿ ಹಿಲ್ಸ್ ಉಪಚುನಾವಣೆಗೆ ಮುನ್ನ ಈ ಆರೋಪ ಕೇಳಿಬಂದಿದ್ದು, ನವೆಂಬರ್ 14 ರಂದು ಎಣಿಕೆ ನಿಗದಿಯಾಗಿದೆ.
“ಮತಕ್ಕಾಗಿ ನಾನು ತಲೆಗೆ ಟೋಪಿ ಹಾಕಿಕೊಳ್ಳಬೇಕಾದ ದಿನ ಬಂದರೆ, ನನ್ನ ತಲೆಯನ್ನು ಕತ್ತರಿಸಿಕೊಳ್ಳಲು ನಾನು ಸಿದ್ಧ. ನಾನು ನಿಜವಾದ ಹಿಂದೂ. ನಾನು ಪ್ರಾರ್ಥನೆ ಮಾಡುವಂತೆ ನಟಿಸುವ ಮೂಲಕ ಇತರ ಧರ್ಮಗಳನ್ನು ಅವಮಾನಿಸುವುದಿಲ್ಲ ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.
