ಇಂಥವರೇ ಸಿಎಂ ಆಗಬೇಕೆಂದು ಯತೀಂದ್ರ ಹೇಳಿಲ್ಲ, ಹೇಳಿಕೆ ತಿರುಚಿದರೆ ಏನು ಮಾಡುವುದು?: ಸಿಎಂ ಸಿದ್ದರಾಮಯ್ಯ

Share
0Shares

ಬೆಂಗಳೂರು: ಹೇಳಿಕೆಯ ಬಗ್ಗೆ ನಾನು ಯತೀಂದ್ರನನ್ನು ಕೇಳ್ದೆ, ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಅಂದ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಾನು ಆ ಬಗ್ಗೆ ಯತೀಂದ್ರನನ್ನು ಕೇಳ್ದೆ. ನೀನು ಏನು ಮಾತನಾಡಿದ್ದೀಯ ಎಂದೆ. ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ, ಇಂಥವರೇ ಮುಂದಿನ ಮುಖ್ಯಮಂತ್ರಿ ಆಗ್ತಾರೆ ಅಂತ ಹೇಳಿಲ್ಲ ಅಂದ. ಅವನ ಹೇಳಿಕೆಯನ್ನು ತಿರುಚಿದರೆ ಏನು ಮಾಡುವುದು? ಎಂದರು.

ಈ ಸಂದರ್ಭದಲ್ಲಿ ಆ ರೀತಿಯ ಹೇಳಿಕೆಯ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, ಯಾರೋ ನಿಮ್ಮಂಥವರು ಕೇಳಿರಬಹುದು. ಯಾರೋ ಪ್ರಶ್ನೆಗಳನ್ನು ಕೇಳಿದ್ದಾರೆ. ಈಗ ನಾನು ಸಹಕಾರ ಸಪ್ತಾಹದ್ದು ಹೇಳ್ದೆ. ಈಗ ನೀವು ಕೇಳಲಿಲ್ವೇ? ಹಾಗೆ ಕೇಳಿರುತ್ತಾರೆ. ಅದಕ್ಕೆ ಅಲ್ಲಿ ಹೇಳಿದ್ದಾನೆ ಎಂದರು.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282