ಮುಂಡರಗಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹಿರಿಯರಿಗೆ ವಾಯು ವಿವಾರಕ್ಕೆ ,ಮಕ್ಕಳಿಗೆ ಆಟವಾಡಲು ಸುರಕ್ಷಿತ ಪರಿಸರಯುಕ್ತ ಉದ್ಯಾನವನ ಬಹಳ ಅವಶ್ಯಕತೆ ಇದೆ ನಮ್ಮ ಮುಂಡರಗಿ ಹೃದಯಭಾಗದಲ್ಲಿರುವ ಪುರಸಭೆ ಉಧ್ಯಾನವನ ಈ ಮೊದಲು ಸುಂದರವಾಗಿ ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳ ಹಿರಿಯರು ಇಲ್ಲಿ ಸಂತೋಷವಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇವಾಗ ಬಿಕೋ ಎನ್ನುತ್ತಿದೆ ಇಲ್ಲಿಯ ಸದ್ಯದ ವಾತಾವರಣ ಸುತ್ತಮುತ್ತಲಿನ ಇರುವ ಜನರಿಗೆ ವಾಸನೆ ಸೊಳ್ಳೆ ಹುಲ್ಲು ಇತ್ಯಾದಿಗಳಿಂದ ತುಂಬಿದೆ. ಮುಖ್ಯಾಧಿಕಾರಿಗಳು, ಜನಪ್ರತಿನಿಧಿಗಳು ಒಂದೋಳ್ಳೆಯ ವಾಕಿಂಗ್ ಪಾತ್ ,ಮಕ್ಕಳಿಗೆ ಮನರಂಜನೆಯ ಆಟೋಪಕರಣಗಳು ಇದ್ದರೆ ಸಾಯಂಕಾಲ ಹಾಗೂ ರಜೆ ದಿನಗಳಲ್ಲಿ ಸರ್ವರಿಗೂ ಅನುಕೂಲವಾಗುತ್ತದೆ ಅದಕ್ಕಾಗಿ ಶಿಘ್ರವಾಗಿ ಪರಿಸರಯುಕ್ತ ವಾತಾವರಣ ಮಾಡಬೇಕು ಎಂದು ಕನ್ನಡ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಮುಧೋಳ ವಿನಂತಿಸಿದ್ದಾರೆ.
Share